ಮಗನಿಗೆ

ನಿನ್ನ ಹಸಿವ ಹಿಂಗಿಸಲಿಲ್ಲವೆಂದು
ಬಯ್ಯಬೇಡ.
ಈ ಪುಣ್ಯ ಭೂಮಿಯಲಿ,
ಪವಿತ್ರ ನದಿಗಳ
ಸಂಗಮವಿದೆ
ನಿನ್ನ ಹೊಟ್ಟೆ ತಣ್ಣಗಿಡಲು.

ಪದಕಗಳಿಸುವ ವಿದ್ಯೆ
ಕಲಿಸಲಿಲ್ಲವೆಂದು
ಜರಿಯ ಬೇಡ.
ಋಷಿ ಮುನಿಗಳ
ವೇದ ಗ್ರಂಥಗಳಿವೆ
ನೀನು ಸಂಸ್ಕಾರ ಹೊಂದಲು.

ನಡುರಾತ್ರಿಯ ಕತ್ತಲಲಿ
ಕೈ ಬಿಟ್ಟೆನೆಂದು
ಹಲುಬಬೇಡ.
ರಾತ್ರಿಯ ಕತ್ತಲಲಿ
ಮಿನುಗುತ್ತವೆ ನಕ್ಷತ್ರಗಳು
ನಿನಗೆ ಬೆಳಕು ನೀಡಲು.

ನಿನ್ನ ದೇಶ ಪ್ರೇಮದ ಬಗ್ಗೆ
ಶಂಕಿಸಿದರೆಂದು
ಮರುಗಬೇಡ.
ಆತ್ಮಬಲ ಒಂದಿರಲಿ
ನೀಡುವಳು ಭಾರತಾಂಬೆ
ನಿನಗೆ ಶ್ರೀರಕ್ಷೆ.

ಅಪನಂಬಿಕೆಗೆ ಕುಗ್ಗದಿರು
ಇರಲಿ ದೇಶ ಪ್ರೇಮ
ಕೊನೆತನಕ.
ಇರುಳಿನ ಹಿಂದಿದೆ ಹಗಲು
ಎದ್ದೇಳು!
ಬಿಡುತವಕ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕೂನನ ಮಗಳು ಕೆಂಚಿಯೂ….
Next post ಕುಂತಿ

ಸಣ್ಣ ಕತೆ

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

cheap jordans|wholesale air max|wholesale jordans|wholesale jewelry|wholesale jerseys